Monthly Archive: December 2015

ಕನ್ನಡ ಸಾಹಿತ್ಯ ಸಮ್ಮೇಳನ – ಎತ್ತಿಗೆ ಜ್ವರ, ಎಮ್ಮೆಗೆ ಬರೆ

ಸಾಹಿತ್ಯಾಸಕ್ತರಿಗೆಲ್ಲಾ ನಿರಾಶೆ, ಕನ್ನಡ ಸಾಹಿತ್ಯ ಚಟವಟಿಕೆಗಳು ರಾಜಕೀಯಮಯವಾಗುತ್ತಿರುವ ಬಗ್ಗೆ ವಿಷಾದ, ಸಾಹಿತ್ಯ ಸಮ್ಮೇಳನಕ್ಕೂ, ಪಂಚಾಯ್ತಿ ಚುನಾವಣೆಗೂ ಎತ್ತಿಂದೆತ್ತಣ ಸಂಬಂಧವಯ್ಯಾ ಎಂಬ ಉಲ್ಲೇಖ ಹಾಗೂ ಉದ್ಗಾರ, ವಿನಾಕಾರಣ ರಾಜಕಾರಿಣಿಗಳು ಮೂಗು ತೂರಿಸುವುದರ ಬಗ್ಗೆ ಆಕ್ಷೇಪ. ಹೀಗೆ ಒಂದಲ್ಲ ನೂರಾರು ರೀತಿಯ ಪ್ರತಿಕ್ರಿಯೆಗಳು ೭೭ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪಂಚಾಯ್ತಿ ಚುನಾವಣೆಯ ಕಾರಣಗಳಿಂದಾಗಿ ಮುಂದೂಡುತ್ತಿರುವುದರ ಬಗ್ಗೆ ಸಾಹಿತ್ಯವಲಯಗಳಿಂದ ಕೇಳಿ ಬರುತ್ತಿವೆ. ಇದು ಸಹಜ. ನನ್ನನ್ನೂ ಸೇರಿಸಿಕೊಂಡು, ಕನ್ನಡ ಪ್ರೀತಿಸುವ ಎಲ್ಲರಿಗೂ, ಸಾಹಿತ್ಯದ ಗಂಧ-ಗಾಳಿಯೇ...