Category: Kannada

ವಿರಕ್ತ ಭಾವದಲಿ

ನಿಶ್ಯಬ್ಧದೆಡೆಗೆನಿರ್ದಿಷ್ಟ ಗುರಿಯಿಲ್ಲದೆ ನಿಂತುಯೋಚಿಸಿದರೇನು ಬಂತುಗುರಿಯಿಲ್ಲದ ಬಾಳುದೊರೆಯಿಲ್ಲದ ನಾಡುಎಂಬಂಥಹ ಈ ಸ್ಥಿತಿಯಲ್ಲಿನಗಬಾರದೆಂದೆನಿಸಿದರೂನಗುತಾನಂದದಲಿಅಳಬೇಕೆನಿಸಿದರೂಅಳಲಾಗದ ನೋವಿನಲಿಎಷ್ಟು ದಿನ ಹೀಗೇಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆನಿಶ್ಚಿಂತೆಯಲಿಎಲ್ಲವನ್ನೂ ಮರೆತು,ಎಲ್ಲರನ್ನೂ ತೊರೆದು,ಎಲ್ಲರಿದ್ದರೂ ಯಾರಿರದೇ,ಎಲ್ಲೆ ಮೀರಲೂ ಕೈಲಾಗದೇಎಲ್ಲೋ ಮುಖಮಾಡಿ ನಿಂತನನ್ನ ದಯನೀಯ ಗತಿ ಕಂಡುಕೇಳದಿದ್ದವರೆಲ್ಲಾ ಕೇಳುವಹೇಳಲಾಗದಿದ್ದವರೆಲ್ಲಾಬುದ್ಧಿ ಹೇಳುವ ಆ ದಿನಬರುವ ಮೊದಲೇಪ್ರಶಾಂತತೆಯತ್ತ ದಿಟ್ಟಿನೆಟ್ಟುಮುಂದೆ ಹೋಗಲೇ?

ಹಂಸಲೇಖಾರ ದೇಸಿಲೋಕದೊಳಗೊಂದು ಸುತ್ತು

ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ...

“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ

“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ. ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ...

ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?

“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು. ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ...

ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ

ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು...

ಅಸಹಾಯಕಿ ಮತ್ತು ಸ್ಮಶಾನ

ಅಸಹಾಯಕಿ (ತುಷಾರ) ಅವಳೆದುರೇ ಇದ್ದು ಹಗಲುಗನಸು ಕಾಣುವುದನು ಖಂಡಿಸಿದಳು ಅವಳಿಲ್ಲದಿರುಳುಗನಸು ಕಾಣುವುದನು ತುಂಡರಿಸಲಾರದ ಹುಡುಗಿ.   ಸ್ಮಶಾನ (ಕರ್ಮವೀರ) ಅದೇನೋ ಹೂಗಾಡು ಹಸುರಿದೆ, ಹಾಸಿದ ಹುಲ್ಲಿದೆ ಎಲ್ಲೆಲ್ಲೂ ಆದರೇನು ಇದು ಹೂಳ್ಗಾಡು ಘನತೆಗಳಿಲ್ಲದ ಸಮತೆಯೊಂದಿದೆ ಇಲ್ಲೂ.

ಭಯ ಮತ್ತು ಆಶ್ಚರ್ಯ

ಭಯ (ಪ್ರಕಟವಾದ ಪ್ರಪ್ರಥಮ ಕವನ) ಗೆಳತಿ ನಿನ್ನ ನೆನಸಿಕೊಳ್ಳದೆ ತಾಸು ಮಾಸವಾದೀತು ವರುಷಕೂಡ ಕಳೆಯಲು ನನಗೆ ತ್ರಾಸವಾದೀತು ಎಂಬ ಭಯ. ಆಶ್ಚರ್ಯ ಆಶ್ಚರ್ಯ! ಕಣ್ಣು-ಕಣ್ಣು ಸೇರುವ ಮೊದಲೇ ಹೃದಯ-ಹೃದಯ ಮಾತನಾಡಿಕೊಳ್ಳುವ ಬಗೆ ನನಗೆ.

ಮಿಲನಕಾಲ

ತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೀ ತಂದಾನೋ ಮುಸ್ಸಂಜೆ ಹೊತ್ತಲ್ಲಿ ಮೋಡಮುತ್ತಿನ ನೀರಲ್ಲಿ ಹಾಡಹಾಡುತ್ತಾ ಭೂಮಿಗೆ ರಂಗು ತಂದಾವೋ… ಎತ್ತಿಂದ ಬಂದಾವೋ ಹೀಗೆಹುಟ್ಟುತ್ತಾ ಒಂದೊಂದೇ ಹಾಗೇಒಟ್ಟಾಗಿ ಬಾನಲ್ಲಿ ತಾರೆ ನಕ್ಕಾವೋ… ಹೊತ್ತಾರೆ ಸೂರ್ಯನ ಹಾಗೇಕೆಂಪಾದ ಕೆನ್ನೆಯ ಮ್ಯಾಗೆಚೆಂದಾದ ರಂಗೋಲಿಗಳು ಮೂಡ್ಯಾವೋ… ಸಂಗಾತಿ ಬಾರೆಂದು ಕೂಗಿಕಣ್ಣಲ್ಲಿ ಸಂಕೋಚ ತೂಗಿಹೆಣ್ಣಿನ ಮನಸಲ್ಲಿ ಆಸೆ ಮೂಡ್ಯಾವೋ… ಚಂದಿರ ಬಂದಾನೋ ಅಲ್ಲಿಮಂದಾರ ನಕ್ಕಾಳೋ ಇಲ್ಲಿಒಂದಾಗೋ ಸಂದೇಶ ಹೇಳಿಕೊಂಡಾವೋ… ಬಾನಲ್ಲಿ ಹುಣ್ಣಿಮೆ ಚೆಲ್ಲಿಬಯಲೆಲ್ಲಾ ಹೂಗಂಧ...

ದಂಡನೆ (ಕರ್ಮವೀರದಲ್ಲಿ ಪ್ರಕಟಿತ ಕತೆ)

ಮನುಷ್ಯ ಯಾವುದಾದರೊಂದು ಹವ್ಯಾಸಕ್ಕೆ ಅಧೀನನಾಗಿರುತ್ತಾನೆಂದು ಭಾವಿಸಿದಂತಿದ್ದ ಹರೀಶನಿಗೆ ತನ್ನ ಬಗ್ಗೆ ಮಾತ್ರ ಆ ನಂಬಿಕೆ ಇರಲಿಲ್ಲ. ಬಡ ಮಾಸ್ತರರೊಬ್ಬರ ಏಕೈಕ ಪುತ್ರನಾಗಿದ್ದ ಹರೀಶ ಹಲವಾರು ಆದರ್ಶಗಳನ್ನು ಮೈಗೂಡಿಸಿಕೊಂಡೇ ಬೆಳೆದವನಾಗಿದ್ದನು. ತಂದೆಯ ಶಿಸ್ತಿಗೆ ತಕ್ಕಂಥ ಮಗನೆಂದೇ ಆತ ಎಲ್ಲಾ ಪರಿಚಿತರಿಂದಲೂ ಹೊಗಳಿಸಿಕೊಳ್ಳುತ್ತಿದ್ದ. ಓದುವುದರಲ್ಲೂ ತನ್ನ ಆಸಾಧಾರಣತೆಯನ್ನು ಅಭಿವ್ಯಕ್ತಿಸುತ್ತಿದ್ದ ಹರೀಶ ಎಲ್ಲರಿಗೂ ತುಂಬಾ ಅಚ್ಚು-ಮೆಚ್ಚಿನವನಾಗಿಯೂ ಇದ್ದ. “ಮುಂದೆ ಏನಾದರೊಂದು ಸಾಧಿಸಿಯೇ ತೀರುತ್ತೇನೆ” ಎಂಬಂಥ ಆಶಾವಾದದ ಮಾತುಗಳನ್ನಾಡುತ್ತಿದ್ದ ಮಗನ ಭವಿಷ್ಯ ನೆನೆನೆನೆದು ಹೆತ್ತವರು ಆಗ್ಗಾಗ್ಗೆ...

ಅಮಾನವೀಯ ಬದುಕಿನ ಅಪಮೌಲ್ಯಗಳು

ನಮ್ಮ ಬದುಕನ್ನೂ, ಬದುಕುತ್ತಿರುವ ರೀತಿಯನ್ನೂ ಒಮ್ಮೆ ಅವಲೋಕಿಸಿ ನೋಡಿದರೆ ಎಂಥಹ ಹೇಸಿಗೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಮನುಷ್ಯನ ಹುಟ್ಟು, ಸಾವು ಹಾಗೂ ಬದುಕುಗಳು ಇತ್ತೀಚೆಗಂತೂ ಅನರ್ಥ ಹಾದಿ ಹಿಡಿದು ನೀರಸವಾಗಿ ಪರಿಣಮಿಸಿವೆ. ಜೀವನ ಯಾಂತ್ರಿಕವಾಗಿದೆ. ಭಾವನಾತ್ಮಕತೆಗೆ ಬೆಲೆಯಿಲ್ಲ. ನೈತಿಕತೆಯ ಅಧಃಪತನವಾಗಿ ಜೀವನದ ಮೌಲ್ಯಗಳೆಲ್ಲಾ ಗಾಳಿಪಾಲಾಗಿವೆ. ಇಂಥಹ ಅಸಂಸ್ಕೃತ ಕಾಲದೊಳಗೆ ನಮಗೂ ಹೀಗೇ ಬದುಕಬೇಕೆಂಬ ಹಂಬಲಗಳಿಲ್ಲ. ಅಪಮೌಲ್ಯಗಳು ಅತಿಯಾಗಿ ಮಾನವ ತನ್ನ ನೀಯತ್ತೆಂಬುದನ್ನು ಹರಾಜು ಮಾಡಿ ಎಲ್ಲಿ ಹೇಗಾದರೂ ಬದುಕುವುದಷ್ಟನ್ನೇ ನೋಡುತ್ತಿದ್ದಾನೆ. ಮನುಷ್ಯನ...