Category: Blog

ಅಭಾಗಿನಿ

ವಿಶಾಲವಾದ ಕಾರೀಡಾರಿನ ಗೋಡೆ ಮಗ್ಗುಲಿನಲ್ಲಿ ಸಾಲು ಬೆಂಚುಗಳನ್ನು ಒಪ್ಪವಾಗಿ ಜೋಡಿಸಲಾಗಿದ್ದ “ಜೀವಾ” ನರ್ಸಿಂಗ್ ಹೋಂ ಅಂದೂ ಕೂಡ ಯಾರೂ ಇಲ್ಲದೆ ಭಣಗುಡುತ್ತಿತ್ತು. ಸಂಜೆಯ ಸೆರಗಿನೊಳಗೆ ಬಹು ಬೇಗನೆ ಜಾರಿಕೊಳ್ಳುತ್ತಿದ್ದ ಇತ್ತೀಚಿನ ದಿನಗಳಲ್ಲಂತೂ ಗಿರಾಕಿಗಳಿಲ್ಲದೇ ಖಾಲಿಹೊಡೆಯುತ್ತಿದ್ದುದ್ದರಿಂದ ತನ್ನ ಪ್ರಸಿದ್ಧಿ, ಪ್ರಭಾವ, ಪಾಂಡಿತ್ಯಗಳೆಲ್ಲಾ ತೀರಾ ತಗ್ಗಿಹೋಗಿವೆಯೆಂದೂ, ಬಹುಕಾಲದಿಂದಲೂ ಜನಗಳನ್ನು ವಂಚಿಸುತ್ತಿದ್ದ ಹಿಕಮತ್ತು ವಗೈರೆಗಳೆಲ್ಲಾ ಉಡುಗಿಹೋಗುತ್ತಿವೆಯೆಂದೂ ಭಾವಿಸಿಕೊಂಡು ಭವಿಷ್ಯದ ತಾಕಲಾಟದಲ್ಲಿ ತಡವರಿಸುತ್ತಾ ಕುಳಿತಿದ್ದ ಗೈನಾಕಾಲಜಿಸ್ಟ್‌ಗೆ ಅಸಾಮಿಯೊಬ್ಬನ ಜೊತೆ ಒಳಬಂದ ನರ್ಸ್‍ಗಳಿಬ್ಬರನ್ನು ಕಂಡು ಆನಂದಾಶ್ಚರ್ಯಗಳೆರಡೂ ಒಟ್ಟಿಗೆ...

Best photo spots in San Francisco

Interesting photo locations in San Francisco San Francisco is an amazing place with so much to shoot. I really don’t remember how many times I have been to this place but still I feel I am not done yet. Interestingly for me, same place looks new each time I visit there, particularly...

ವಿರಕ್ತ ಭಾವದಲಿ

ನಿಶ್ಯಬ್ಧದೆಡೆಗೆನಿರ್ದಿಷ್ಟ ಗುರಿಯಿಲ್ಲದೆ ನಿಂತುಯೋಚಿಸಿದರೇನು ಬಂತುಗುರಿಯಿಲ್ಲದ ಬಾಳುದೊರೆಯಿಲ್ಲದ ನಾಡುಎಂಬಂಥಹ ಈ ಸ್ಥಿತಿಯಲ್ಲಿನಗಬಾರದೆಂದೆನಿಸಿದರೂನಗುತಾನಂದದಲಿಅಳಬೇಕೆನಿಸಿದರೂಅಳಲಾಗದ ನೋವಿನಲಿಎಷ್ಟು ದಿನ ಹೀಗೇಕಾಲ ಕಳೆಯಲಿ? ಕಣ್ಣು ಮುಚ್ಚಿ ಕ್ಷಣವೊಮ್ಮೆನಿಶ್ಚಿಂತೆಯಲಿಎಲ್ಲವನ್ನೂ ಮರೆತು,ಎಲ್ಲರನ್ನೂ ತೊರೆದು,ಎಲ್ಲರಿದ್ದರೂ ಯಾರಿರದೇ,ಎಲ್ಲೆ ಮೀರಲೂ ಕೈಲಾಗದೇಎಲ್ಲೋ ಮುಖಮಾಡಿ ನಿಂತನನ್ನ ದಯನೀಯ ಗತಿ ಕಂಡುಕೇಳದಿದ್ದವರೆಲ್ಲಾ ಕೇಳುವಹೇಳಲಾಗದಿದ್ದವರೆಲ್ಲಾಬುದ್ಧಿ ಹೇಳುವ ಆ ದಿನಬರುವ ಮೊದಲೇಪ್ರಶಾಂತತೆಯತ್ತ ದಿಟ್ಟಿನೆಟ್ಟುಮುಂದೆ ಹೋಗಲೇ?

ಹಂಸಲೇಖಾರ ದೇಸಿಲೋಕದೊಳಗೊಂದು ಸುತ್ತು

ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ...

“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ

“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ. ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ...

ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?

“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು. ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ...

ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ

ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು...

ಅಸಹಾಯಕಿ ಮತ್ತು ಸ್ಮಶಾನ

ಅಸಹಾಯಕಿ (ತುಷಾರ) ಅವಳೆದುರೇ ಇದ್ದು ಹಗಲುಗನಸು ಕಾಣುವುದನು ಖಂಡಿಸಿದಳು ಅವಳಿಲ್ಲದಿರುಳುಗನಸು ಕಾಣುವುದನು ತುಂಡರಿಸಲಾರದ ಹುಡುಗಿ.   ಸ್ಮಶಾನ (ಕರ್ಮವೀರ) ಅದೇನೋ ಹೂಗಾಡು ಹಸುರಿದೆ, ಹಾಸಿದ ಹುಲ್ಲಿದೆ ಎಲ್ಲೆಲ್ಲೂ ಆದರೇನು ಇದು ಹೂಳ್ಗಾಡು ಘನತೆಗಳಿಲ್ಲದ ಸಮತೆಯೊಂದಿದೆ ಇಲ್ಲೂ.

ಭಯ ಮತ್ತು ಆಶ್ಚರ್ಯ

ಭಯ (ಪ್ರಕಟವಾದ ಪ್ರಪ್ರಥಮ ಕವನ) ಗೆಳತಿ ನಿನ್ನ ನೆನಸಿಕೊಳ್ಳದೆ ತಾಸು ಮಾಸವಾದೀತು ವರುಷಕೂಡ ಕಳೆಯಲು ನನಗೆ ತ್ರಾಸವಾದೀತು ಎಂಬ ಭಯ. ಆಶ್ಚರ್ಯ ಆಶ್ಚರ್ಯ! ಕಣ್ಣು-ಕಣ್ಣು ಸೇರುವ ಮೊದಲೇ ಹೃದಯ-ಹೃದಯ ಮಾತನಾಡಿಕೊಳ್ಳುವ ಬಗೆ ನನಗೆ.

ಮಿಲನಕಾಲ

ತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೋತಂದಾನೋ ತಂದಾನೋ ತಾನೀ ತಂದಾನೋ ಮುಸ್ಸಂಜೆ ಹೊತ್ತಲ್ಲಿ ಮೋಡಮುತ್ತಿನ ನೀರಲ್ಲಿ ಹಾಡಹಾಡುತ್ತಾ ಭೂಮಿಗೆ ರಂಗು ತಂದಾವೋ… ಎತ್ತಿಂದ ಬಂದಾವೋ ಹೀಗೆಹುಟ್ಟುತ್ತಾ ಒಂದೊಂದೇ ಹಾಗೇಒಟ್ಟಾಗಿ ಬಾನಲ್ಲಿ ತಾರೆ ನಕ್ಕಾವೋ… ಹೊತ್ತಾರೆ ಸೂರ್ಯನ ಹಾಗೇಕೆಂಪಾದ ಕೆನ್ನೆಯ ಮ್ಯಾಗೆಚೆಂದಾದ ರಂಗೋಲಿಗಳು ಮೂಡ್ಯಾವೋ… ಸಂಗಾತಿ ಬಾರೆಂದು ಕೂಗಿಕಣ್ಣಲ್ಲಿ ಸಂಕೋಚ ತೂಗಿಹೆಣ್ಣಿನ ಮನಸಲ್ಲಿ ಆಸೆ ಮೂಡ್ಯಾವೋ… ಚಂದಿರ ಬಂದಾನೋ ಅಲ್ಲಿಮಂದಾರ ನಕ್ಕಾಳೋ ಇಲ್ಲಿಒಂದಾಗೋ ಸಂದೇಶ ಹೇಳಿಕೊಂಡಾವೋ… ಬಾನಲ್ಲಿ ಹುಣ್ಣಿಮೆ ಚೆಲ್ಲಿಬಯಲೆಲ್ಲಾ ಹೂಗಂಧ...