Monthly Archive: October 2015

“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ

“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ. ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ...

ಮತ್ತೇ ಬರಲಾರಿರಾ ಅಶ್ವಥ್, ಅನಂತಸ್ವಾಮಿ, ಕಾಳಿಂಗರಾಯರೇ?

“ಅಯ್ಯೋ ವಿಧಿಯೇ! ಎಂಥಹ ಧ್ವನಿ ನಿಂತು ಹೋಯಿತು”. ಇದು ನನ್ನೊಬ್ಬನದಲ್ಲ. ಇಡೀ ಕನ್ನಡಿಗರೆದೆಯಾಳದಿಂದೊಟ್ಟಿಗೆ ಹೊರಬಂದ ನೋವಿನ ಮಾತುಗಳು. ಕನ್ನಡ ಸುಗಮ ಸಂಗೀತಲೋಕವನ್ನಾಳಿದ ದೊರೆ ಸಿ.ಅಶ್ವಥ್ ಅವರ ನಿರ್ಗಮದಿಂದ, “ಇನ್ನೆಲ್ಲಿ? ಮತ್ತೆ ಕನ್ನಡದಲ್ಲಿ, ಆ ವೈಭವದ ದಿನಗಳು” ಎಂದು ಕನ್ನಡ ಕಾವ್ಯ ಜಗತ್ತಿನ ಕುಲಬಾಂಧವರೆಲ್ಲಾ ಗೋಳಿಟ್ಟ ದುರ್ದಿನಳವು. ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರ ಕಾಲಾನಂತರ ಕನ್ನಡದಲ್ಲಿ ಮತ್ತೆ ಕನ್ನಡ ಕಾವ್ಯಗಳನ್ನು “ಜನಮನಗಳಿಗೆ ತಲುಪಿಸಲಾಗುವುದಿಲ್ಲವಲ್ಲಾ?” ಎಂದು ಎಲ್ಲಾ ಕೈಚೆಲ್ಲಿ ಕುಂತಿದ್ದ ಕಾಲವದು. ಕಾಳಿಂಗರಾಯರಷ್ಟೇ...

ಸಾಫ್ಟ್ ವೇರ್ ಎಂಜಿನೀಯರೊಬ್ಬನ ಹೃದಯ ಹಾರ್ಡ್ ಆದ ಕಥೆ

ಅಮೇರಿಕಾದ ಕ್ಯಾಲಿಫೊರ್ನಿಯಾದ ನಗರವೊಂದರಲ್ಲಿ ಗುಂಡಿನ ಸುರಿಮಳೆಗೈದು ಇಡೀ ನಗರವನ್ನೇ ತಲ್ಲಣಗೊಳಿಸಿದ ಈತ ಭಾರತೀಯನೆಂಬುದೇ ಕಹಿಯಾದ ಸತ್ಯ. ನಮ್ಮಲ್ಲಿ ಕಚ್ಚಾಟ, ಹೊಡೆದಾಟಗಳೆಲ್ಲಾ ಇದ್ದದ್ದೇ ಬಿಡಿ. ಕಿತ್ತಾಡಿ, ಬೈದಾಡಿ ಒಂದಾಗುವ ಅಥವಾ ಎಂದೂ ಒಂದಾಗದ ಸಾಕಷ್ಟು ಉದಾಹರಣೆಗಳಿವೆ. ಆಗದವರಿಗೆ ಶಾಪ ಹಾಕುವುದು ಅಥವಾ ಯಾವಾಗಲೂ ಕೇಡು ಬಯಸುವುದು, ಇನ್ನೂ ಸ್ವಲ್ಪ ಮುಂದುವರೆದು ಆತನ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲಾಕಿ ದಕ್ಕಿಸಿಕೊಡದಂತೆ ತಡೆಯುವುದು, ಇಲ್ಲವೇ ಆತನ ಜೊತೆ ತುಂಬಾ ಭಿನ್ನಾಭಿಪ್ರಾಯಗಳಿದ್ದರೆ, ಆತನನ್ನು ಶಾಶ್ವತವಾಗಿ ದೂರವಿಡುವುದು, ಇವು...