Category: ಸಿನಿಗವನ

ಕರಾಳ ಕೊರೋನ

ಉಸಿರು ವಿಷವಾಗಿಸರಿಯೇ ಬೆಸವಾಗಿಬದುಕು ಹಳಿತಪ್ಪಿಹಸಿದಿರುವವರು ಎಷ್ಟೋ? ಬಂದು ಯಾವಾಗನುಂಗಿ ಹಾಕುವುದೋಒಂದೂ ತಿಳಿಯದೆಕುಸಿದಿರುವವರು ಎಷ್ಟೋ? ಹೊರಗೆ ಜಗವಿಲ್ಲದೆಒಳಗೆ ನಗುವಿಲ್ಲದೆಇದ್ದಲ್ಲೇ ಭೀತಿಯಲಿನಡುಗುವವರು ಎಷ್ಟೋ? ತಮ್ಮವರು ತಮಗಿಲ್ಲದೆನೋವಿನಲಿ ಜೊತೆಯಿಲ್ಲದೆಸತ್ತರೂ ಸದ್ದಿಲ್ಲದಂತೆನಡೆದವರು ಅದೆಷ್ಟೋ?

ಆಸೆ

ನಿನ್ನ ಚೆಂದುಟಿಗಳರಸ ಹೀರುವ ದುಂಭಿನಾನಾಗುವಾಸೆ ನಿನ್ನ ಕಣ್ಣ ಕಾಸರದಿಸಣ್ಣ ಮೀನಾಗಿ ನಾನುತೇಲಾಡುವಾಸೆ ನಿನ್ನ ನಡುವನು ಬಳಸಿಬೆನ್ನನಾಳುವ ಜಡೆಯಚೆನ್ನು ಸವಿವಾಸೆ ನಿನ್ನ ಚೆಲುವುನ ನಗೆಯನಿಂತ ನಿಲುವಿನ ಬಗೆಯಕಣ್ತುಂಬಿಸಿಕೊಳ್ಳುವಾಸೆ ನಿನ್ನ ಮಲ್ಲಿಗೆಯ ಮುಡಿಗೆಮುಂಗುರುಳಿನ ಮುಗಿಲಿಗೆಏಣಿಯಿಡುವಾಸೆ ನೀನು ಸಿಕ್ಕಿದರೆ ಎದುರುತಪ್ಪು-ಒಪ್ಪುಗಳ ಮರೆತುನಕ್ಕುಬಿಡುವಾಸೆ ನೀನು ಒಪ್ಪಿದರೆ ಒಮ್ಮೆಅಪ್ಪಿ ಕೆನ್ನೆಗೆ, ಹಣೆಗೆಮುತ್ತನಿಡುವಾಸೆ ನಿನ್ನ ದೇಹದ ಸಿರಿಗೆಮುದ್ದಿನರಗಿಣಿಮರಿಗೆಕಾಮನ ಬಿಲ್ಲೂಡುವಾಸೆ ರತಿಯ ಮೀರಿಸುರತಿಯಮೈಮರೆತು ಮೋಹದಲಿಎತ್ತಿಕೊಳ್ಳುವಾಸೆ ತಾರೆ ಗೆಳತಿಯೇ ನಿನ್ನಹತ್ತಿರಕೆ ಬಾ ಎಂದುಕೈ ಚಾಚುವಾಸೆ

ಗುಮ್ಮ

ಆ ರಾತ್ರಿ ಏಕೋ, ಮಲಗಲಾಗಲಿಲ್ಲ ಮನಸು ಮಾಮೂಲಿನಂತಿರಲಿಲ್ಲ ಎದ್ದು ಕೂತೆ, ಏನೋ ಸರಿಯಿಲ್ಲವೆನಿಸಿತ್ತು, ದಣಿವಿತ್ತು ನಿದ್ದೆಯಲ್ಲೇ ನಡೆದೆ ಕಿಟಕಿಯ ಕಡೆ ತುಸು ತೆರೆಕೊಂಡಂತಿತ್ತದರ ಬಾಗಿಲು ಉರಿವ ಧಗೆ, ಗಾಳಿಗೇನಾಗಿತ್ತೋ ಕಾಣೆ ಪೂರ್ತಿ ಸರಿಸಿದೆ ಕುರುಡನೆಂದೆನಿಸಿತಾ ಒಂದು ಕ್ಷಣ ಕಾಣದೇನೂ ಆಚೆಕಡೆ, ಅನಂತದೆಡೆಗೂ ಕಾಡ ಕತ್ತಲೆ, ಬಾನಲ್ಲೂ ಹೊಳಹಿಲ್ಲ, ಬೆಳಕಿಂಡಿಯಿಲ್ಲ ಇಂತಿಪ್ಪ ಇರಿಳಿನಲಿ, ಅಲ್ಲೆಲ್ಲೋ ದೂರದಲ್ಲಿ ಪಳಕ್ಕನರಳಿದ ಕಣ್ಣುಗಳು, ತಟಕ್ಕನೆ ಮಾಯ ಪುಡಿಯಾಯ್ತು ಗುಂಡಿಗೆ ಸಿಡಿಲೊಡೆದ ಭೀತಿಯಲ್ಲೂ ಕಣ್ದಿಟ್ಟಿ ಕಿಟಕಿಯಲಿ ಮೈ...

ಆರೋಹಣ

ಪ್ರೇಮ ಪರ್ವತಾರೋಹಣಮಾಡೇ ಹೊರಡೋಣಎದೆಯ ಭಾವಗಳ ಬಾವುಟಅಲ್ಲೇ ಚಿತ್ರಿಸಿ ಹಾರಿಸೋಣನೆನಪಿಗಿರಲೊಂದು ಸಂಪುಟಮುದ್ರಿಸಿ ಇಟ್ಟುಕೊಳ್ಳೋಣ! ಏರುವಾದಿಯಲಿ ಕಾಡಿವೆಹಾಡೋ ಹಕ್ಕಿಗಳು, ಗೂಡಿವೆಹುಲಿ-ಚಿರತೆ ಸಿಂಹಾದಿವಿಷಜಂತು ಕಾದಿವೆಏನೇ ಎದುರಾಗಲಿ, ಗುರಿ-ಬಿಡದ ದಾರಿ ಹಿಡಿಯೋಣ! ಅಲ್ಲಿ ಹರಿವ ಜಲಪಾತದಲಿಹಳತ ಕೊಳೆ ತಳ ಸೇರಲಿಜಗವ ಮರೆತು, ಜನರ ಹೊರತುಹೊಸತು ಬಾಳನು ಬಿತ್ತೋಣಎಷ್ಟು ಬೇಕಷ್ಟರಲ್ಲಿ, ಹೇಗೆಬದುಕುವುದೆಂದು ತಿಳಿಸೋಣ!

ಒಂಟಿತನ

ಬಾನ ಬಯಲಾಗಿದೆಬತ್ತಲೆ, ಬರೀ ಕತ್ತಲೆಮುನಿಸಿನಿಂದಿದೆ ನಭಭೂದೇವಿಯ ಮೇಲೆ ಚಂದಿರನ ಸುಳಿವಿಲ್ಲಬೆಳಕನ್ನು ತರಲಿಲ್ಲತಾರೆಗಳೂ ತಾವೇಕೊಇಂದವನ ಬಳಸಿಲ್ಲ ಗಾಳಿಗೂ ಕಚಗುಳಿಯಮೂಡಿಸುವ ಮನಸಿಲ್ಲಮೋಡಕೂ ಅದರೊಡನೆತಾನಾಡುವ ಒಲವಿಲ್ಲ ಹೂವಾದರೂ ಉಸಿರಾಡಿಗಂಧವನು ಬಿಡುತ್ತಿಲ್ಲಮಳೆಯಾಗಿದೆ, ಮರದಿಂದಜೀರುಂಢೆಯ ದನಿಯಿಲ್ಲ ವಿಧಿಯೊಡನೆ ಕಾದಾಡಿಬರಿಗೈಯ್ಯೇ ನಿನಗಿಂದುದಾರಿ ನೋಡೆನು ಫಲ?ಪ್ರಿಯತಮನ ಬರುವಿಲ್ಲ

ಪ್ರಶ್ನೆಗಳು

ನಾ ನಿನ್ನಕೇಳಬೇಕೆಂದುಕೊಳ್ಳುತ್ತಿದ್ದೆಅದೇಕೆ ಹಾಗೆ,ನೋಡಿ ನಕ್ಕಿದೆ? ನಾ ಬಹುದಿನಗಳಿಂದಲೂಬೆಳೆಸಿ, ಪೋಷಿಸಿದಎಳೆಯ ಭಾವನೆಗಳುನಿನಗೆ ಅಪಹಾಸ್ಯವೆ? ಮಳೆಯ ಬಿಲ್ಲಿನೊಳುಎದೆಯ ತುಂಬಿರಲುಬಗೆ ಬಗೆಯ ಕನಸುಗಳವುನಿನಗೆ ಲಘುವಾದವೆ? ಚೆಲುವ ಕಾಂತಿಯನುಒಲವ ಪ್ರಣತಿಯಲಿಟ್ಟುಪೂಜೆ ಮಾಡಿದ ಪರಿಯುನಿನಗೆ ಅವಮಾನವೆ? ನಗೆಹೂವ ರಾಶಿಯನುಮೊಗಹೊತ್ತ ರೀತಿಯನುಕಂಡು ಮೋಹಿಸಿದ್ದೊಂದುನಿನಗೆ ಅಪರಾಧವೆ? ನೀ ಬಹುಶಃ ನಾನಾಗಿನನ್ನಂತೆ ನಿನಗಾಗಿಪರಿತಪಿಸಿ ಪರದಾಡಿದರೆನಿನಗೆ ಅನುಕೂಲವೆ?

ದಿಟ್ಟತನ

ಎದೆಯಾಳದೊಳಗೆಲ್ಲೋಕಟ್ಟಿ ಬಚ್ಚಿಟ್ಟಿರುವಕನಸು ಬುತ್ತಿಯ ಬಗ್ಗೆನಿನಗೆತಿಳಿಯಿತಾದರು ಹೇಗೆ? ಚೆಲುವಿನಾಸರೆಯೊಸೆದುಕಣ್ಣೊಳಗಿಂದ ಅಲ್ಲಿಳಿದುನೀನವನು ಹೆಕ್ಕಿ ಹೆಕ್ಕಿಕತ್ತು ಹಿಸುಕುವುದನುಕಂಡ ಮೇಲೂಮೂರ್ಖನಾಗಲಾದೀತೆ? ಹೋಗೆ ಹೋಗೆ!

ಮಾತು-ಮೌನ

ನೆನಪಿಸಿಕೊ, ಆಗಹೇಗೆ ಜೊತೆ-ಜೊತೆಗೆ ಹೆಜ್ಜೆಯೊಳಗೆಜ್ಜೆಯಿಟ್ಟುಲಜ್ಜೆ ಎಂಬುದನ್ನು ಬದಿಗಿಟ್ಟುಬಾಂಬಣ್ಣ ಕರಗುವವರೆಗೂಹರಟುತ್ತಿದ್ದದ್ದು ಅದೆಷ್ಟು? ನರ ನರಗಳೂ ನಿಮಿರಿ,ಅಂಗಾಂಗಗಳೆಲ್ಲವೂ ಅದುರಿಹೊಟ್ಟೆ ಕಟ್ಟುವವರೆಗೂಬಿಡದೆ ನಕ್ಕಿಬಿಟ್ಟಿದ್ದೆಷ್ಟು? ಯಾರಿರಲಿ, ಬಿಡಲಿಏನಂದರೂ ಅನ್ನಲಿನಮಗೇನು? ಲೆಕ್ಕಿಸದೆ, ಇಬ್ಬರು-ಒಬ್ಬರಾಗಿ ಅಲೆದದ್ದೆಷ್ಟು? ಊಹಿಸಿಕೋ ಈಗಕಾಯುತಿರುವೆವು ಹೇಗೆ? ಮತ್ಸರವ ಮುಂದಿಟ್ಟುಬೆಳೆದ ಭಾವಗಳ ಬಲಿಗಿಟ್ಟುಕಾದು ಬೂದಿಯಾಗುವವರೆಗೂಎದೆಯ ಕೆಂಡದೊಳಗಿಟ್ಟು ಮಾತೆಲ್ಲಾ ಮೌನವಾಗಿಮೌನವದು ನೀರಾಗಿಕಣ್ಣೊಳಗೆ ಕರಗಿ ಜಾರಿದರೂಅರಿಯದೆ ಪಣವ ತೊಟ್ಟು ಬೆರೆಯಲಿಲ್ಲ ಮತ್ತೊಮ್ಮೆಉಳಿಸಬಹುದಿತ್ತಲ್ಲವೆ? ಒಲುಮೆಆದುದೆಲ್ಲವನು ಮರೆತುನಕ್ಕುಬಿಟ್ಟಿದ್ದರೆ ಹಠಬಿಟ್ಟು

ಕಳ್ಳತನ

ಹುಡುಗಿನಿನ್ನ ನೋಡಲು ಬಂದನನ್ನಪರದೆಯ ಮರೆಯಿಂದಕದ್ದು ನೋಡಿದೆನನ್ನೆದುರೇಕಳ್ಳತನ ಮಾಡಿದೆ ಹೊರಟು ನಿಂತಾಗಬಾಗಿಲ ಬಳಿ ಬಂದೆ“ಮತ್ತೆ ಬರುವಿರಾ?”ಎಂದೇನೋ ಕೇಳಬೇಕೆಂದುಹೇಗೇ? ಅಂದುಕೊಂಡೆನಾನದನ್ನು ಗಮನಿಸಿದೆ ಮುಂದೆ ನಾ“ರಿಕ್ಷಾ ಎಲ್ಲಿ ಸಿಗುತ್ತದೆ?”ಎಂದು ತಂಗಿಯನ್ನು ಕೇಳಿದ್ದೇ ತಡತಕ್ಷಣ ನೀನು ಉತ್ತರಿಸಿದೆಯಲ್ಲಾ“ಅಲ್ಲೇ ಮುಂದೆ” ನಾಚಿಕೆ ಇಲ್ಲದೆ.

ಪ್ರಶ್ನೆ

(ತುಷಾರದಲ್ಲಿ ಕವಿ ಕೆ ಎಸ್ ನ ಆಯ್ಕೆ ಕವನ) ಗೆಳತಿನಾ ಕಂಡಾಗಲೆಲ್ಲಾನಿನ್ನ ಕಣ್ಣಲ್ಲಿಒಂದುಮಲ್ಲಿಗೆಯ ಹೂವರಳಿನಗುವುದೇಕೆ? ನಿನ್ನಸವಿಮಾತುಗಳುನನ್ನೆದೆಯ ಅಂಗಳದಿಒಲವಿನ ರಂಗೋಲಿಇಡುವುದೇಕೆ? ನಿನ್ನಕೈ ಬೆರಳುಗಳನವಿರಾದ ಸ್ಪರ್ಷಕ್ಕೆನನ್ನ ಮೈಮನಗಳಲ್ಲಿಮಿಂಚಿನ ಬಳ್ಳಿಗಳುಹರಿವುದೇಕೆ? ನಿನ್ನಆ ಮುಂಗುರುಳುಮೆಲುಗಾಳಿಗಲುಗಿಒಲವ ತೊಟ್ಟಿಲೊಳಿಟ್ಟು ನನ್ನತೂಗುವುದೇಕೆ? ನಿನ್ನನಡೆ ಬಳುಕಿರಲುನನ್ನ ಮಾನಸ ವೀಣೆಮಧುರ ಮೋಹನರಾಗವನುಡಿಸುವುದು ಏಕೆ?