Category: ಸಿನಿಲೇಖನ

ವಾಣಿಯ ವೀಣೆಯ ಝೇಂಕಾರದಲಿ …

ಗಾನ ಸರಸ್ವತಿ ವಾಣಿಜಯರಾಂ ಧ್ವನಿ ಜೀವಜಲ, ಅದು ಒತ್ತಡದ ಬದುಕಿಗೊಂದು ಸಿಧ್ದೌಷಧಿ, ನೊಂದ ಮನಸ್ಸುಗಳಿಗೆ ಮುದನೀಡವ ಮಂದಾನಿಲ, ದಿನದ ಬಾಧೆಗಳೆಲ್ಲವನ್ನೂ ಮರೆಸಿ ಮಲಗಿಸುವ ಜೋಗುಳ. ನಾನು ವಾಣಿಜಯರಾಂ ಹಾಡಿರುವ ಕನ್ನಡ ಚಲನ ಚಿತ್ರ ಗೀತೆ, ಭಾವಗೀತೆ ಹಾಗೂ ಭಕ್ತಿಗೀತೆಗಳೆಲ್ಲವನ್ನು ಬಹುಪಾಲು ಕೇಳಿ ಮೈ-ಮನ ತುಂಬಿಸಿಕೊಂಡಿದ್ದೇನೆ. ಜೊತೆಗೆ, ಅವರ ಹಿಂದೀ ಹಾಡುಗಳು, ಗಜಲ್‍ಗಳು, ಭಜನ್‍ಗಳು, ಸಂಸ್ಕೃತ ಶ್ಲೋಕಗಳು ಎಲ್ಲವನ್ನೂ ಅಕ್ಷರಾದಿಯಾಗಿ ಆನಂದಿಸಿದ್ದೇನೆ. ಪ್ರತಿಯೊಂದು ಹಾಡಿನಲ್ಲೂ ಅವರು ಭಾಷೆಯನ್ನು ಬಳಸುವ ರೀತಿ, ಭಾವ...

ಕನ್ನಡ ಚಿತ್ರರಂಗದ ಕುತ್ತಿಗೆ ಹಿಸುಕುತ್ತಿರವ ಡಬ್ಬಿಂಗ್ ನಿಷೇಧವೆಂಬ ಭೂತ

ತೀರಾ ಇತ್ತೀಚೆಗೆ ಅಂದರೆ “ರಂಗೀತರಂಗ” ಹಾಗು “ಬಾಹುಬಲಿ” ಎಂಬ ಕನ್ನಡದ ಹಾಗು ಒಂದು ರೀತಿಯಲ್ಲಿ ಕನ್ನಡಿಗರನ್ನೊಳಗೊಂಡಿರುವ ತೆಲುಗಿನ ಚಿತ್ರಗಳು ಚಿತ್ರಮಂದಿರಕ್ಕಾಗಿ ನಡೆಸಿದ ಪೈಪೋಟಿಯನ್ನು ಕರ್ನಾಟಕದ ಜನ ವಿಶಾಲವಾದ ತೆರೆಯ ಮೇಲೆಯೇ ವೀಕ್ಷಿಸಿದ್ದಾಯಿತು. ಒಂದು ಅತೀ ದೊಡ್ಡ ಬಜೆಟ್ಟಿನ, ಅತೀ ದೊಡ್ಡ ಜನಗಳ ಬೆಂಬಲದಿಂದ ನಿರಾಯಾಸವಾಗಿ ಕನ್ನಡನಾಡಿನಲ್ಲಿ ಬಿಡುಗಡೆಯಾದ ತೆಲುಗಿನವರ ಚಿತ್ರ. ಇನ್ನೊಂದು ಹೊಸಬರ, ಹೊಸತನದ ಹಣೆಪಟ್ಟಿಯೊತ್ತು, ಪ್ರೇಕ್ಷಕನಲ್ಲಿ ಹೊಸ ಭರವಸೆ ಹುಟ್ಟಿಸಿಲೇಬೆಕೆಂಬ ಹಂಬಲ ಹೊತ್ತು ಕನ್ನಡಿಗರ ನಾಡಿನಲ್ಲಿ ನಿಲ್ಲಲು ಹೆಣಗಾಡಿದ...

ಕನ್ನಡ ಸಾಹಿತ್ಯ ಸಮ್ಮೇಳನ – ಎತ್ತಿಗೆ ಜ್ವರ, ಎಮ್ಮೆಗೆ ಬರೆ

ಸಾಹಿತ್ಯಾಸಕ್ತರಿಗೆಲ್ಲಾ ನಿರಾಶೆ, ಕನ್ನಡ ಸಾಹಿತ್ಯ ಚಟವಟಿಕೆಗಳು ರಾಜಕೀಯಮಯವಾಗುತ್ತಿರುವ ಬಗ್ಗೆ ವಿಷಾದ, ಸಾಹಿತ್ಯ ಸಮ್ಮೇಳನಕ್ಕೂ, ಪಂಚಾಯ್ತಿ ಚುನಾವಣೆಗೂ ಎತ್ತಿಂದೆತ್ತಣ ಸಂಬಂಧವಯ್ಯಾ ಎಂಬ ಉಲ್ಲೇಖ ಹಾಗೂ ಉದ್ಗಾರ, ವಿನಾಕಾರಣ ರಾಜಕಾರಿಣಿಗಳು ಮೂಗು ತೂರಿಸುವುದರ ಬಗ್ಗೆ ಆಕ್ಷೇಪ. ಹೀಗೆ ಒಂದಲ್ಲ ನೂರಾರು ರೀತಿಯ ಪ್ರತಿಕ್ರಿಯೆಗಳು ೭೭ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಪಂಚಾಯ್ತಿ ಚುನಾವಣೆಯ ಕಾರಣಗಳಿಂದಾಗಿ ಮುಂದೂಡುತ್ತಿರುವುದರ ಬಗ್ಗೆ ಸಾಹಿತ್ಯವಲಯಗಳಿಂದ ಕೇಳಿ ಬರುತ್ತಿವೆ. ಇದು ಸಹಜ. ನನ್ನನ್ನೂ ಸೇರಿಸಿಕೊಂಡು, ಕನ್ನಡ ಪ್ರೀತಿಸುವ ಎಲ್ಲರಿಗೂ, ಸಾಹಿತ್ಯದ ಗಂಧ-ಗಾಳಿಯೇ...

ಅನಾಥವಾಗಿ ಹೋಗುತ್ತಿರುವ ಅಪರೂಪದ ಹಾಡುಗಳು

ಹಲವಾರು ಕಾರಣಗಳಿಂದ ಇಡೀ ವಿಶ್ವದಲ್ಲೇ ವಿಶಿಷ್ಟವಾದುದು ಭಾರತೀಯ ಚಿತ್ರರಂಗ. ಚಲನ ಚಿತ್ರಗಳಲ್ಲಿ ಹಾಡುಗಳೆಂಬ ಪರಿಕಲ್ಪನೆಯನ್ನು, ಬಹಶಃ ಭಾರತದಂಥಹ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಕಾಣಲು ಸಾಧ್ಯ. ನಮ್ಮಲ್ಲಿ ಹಾಡುಗಳಿಗೆ ವಿಶೇಷವಾದ ಮಹತ್ವವಿದೆ. ಸಿನಿಮಾದಲ್ಲಿ ಹಾಡು ಒಂದು ಭಾಗವಾಗಿ ಬೆರೆತುಹೋಗುತ್ತದೆ. ಕೆಲವೊಮ್ಮೆ ಹಾಡುಗಳಿಂದಲೇ ಒಂದು ಚಿತ್ರದ, ಸನ್ನಿವೇಶದ, ಪಾತ್ರದ ಪರಿಚಯವಾಗಿಹೋಗುತ್ತದೆ. ಮಾತುಗಳಲ್ಲೇ ಎಲ್ಲವನ್ನೂ ಹೇಳಲು ಹಲವಾರು ಸಾರಿ ಸಾಧ್ಯವಾಗುವಿದಿಲ್ಲ. ಅಂಥಹ ಸಂದರ್ಭಗಳಲ್ಲೆಲ್ಲಾ ಹಾಡುಗಳು ಬಹಳ ಪರಿಣಾಮಕಾರಿಯಾಗಿ ಪ್ರೇಕ್ಷಕನಿಗೆ ಸಿನಿಮಾವನ್ನು ತಲುಪಿಸುವಲ್ಲಿ ಸಹಕಾರಿಯಾಗುತ್ತವೆ....

ರಂಗರಾಯರೇ, ಅಗಣಿತ ರಾಗಮಣಿಗಳ ನಡುವೆ ನಿಮ್ಮನೇ ಮೆಚ್ಚಿದೆ ನಾನು

ಎಂ.ರಂಗರಾವ್ ಎಂದೊಡನೆ ತಕ್ಷಣ ನೆನಪಿಗೆ ಬರುವುದೇನೆಂದರೆ ಕನ್ನಡದ ಸುಶ್ರಾವ್ಯ ಚಲನ ಚಿತ್ರಗೀತೆಗಳ ಬಹು ದೊಡ್ಡ ಪಟ್ಟಿ. ಆಕಾಶವಾಣಿಯ “ಕೇಳುಗರ ಮೆಚ್ಚಿನ ಚಿತ್ರಗೀತೆ” ಕಾರ್ಯಕ್ರಮಗಳಲ್ಲಿ, ಕನ್ನಡದ ಯಾವ ಸಂಗೀತ ನಿರ್ದೇಶಕರ ಅತೀ ಹೆಚ್ಚು ಹಾಡುಗಳು ಇದುವರೆಗೂ ಪ್ರಸಾರವಾಗಿವೆ ಎಂದು ಪಟ್ಟಿ ಮಾಡಿದರೆ, ಬಹುಶಃ ಜಿ.ಕೆ.ವೆಂಕಟೇಶ್ ನಂತರ ಅವರ ಹತ್ತಿರತ್ತಿರ ನಿಲ್ಲಬಲ್ಲ ಮತ್ತೊಬ್ಬ “ಸಂಗೀತ ಕಲಾನಿಧಿ” ಶ್ರೀ ಎಂ.ರಂಗರಾವ್ ಅವರೊಬ್ಬರೇ. ವಿಜಯ ಭಾಸ್ಕರ್, ಟಿ.ಜಿ.ಲಿಂಗಪ್ಪ, ರಾಜನ್-ನಾಗೇಂದ್ರರಂಥಹ ದೈತ್ಯ ಸಂಗೀತ ಸಾರ್ವಭೌಮರ ನಡುವೆ ಇದ್ದೂ,...

ಬೊಗಳೆ ಕನ್ನಡೊದ್ಧಾರಕರಿಗೆ ಕಾರಂತರ ಮಾತಿನೇಟು

ಶಿವರಾಮ ಕಾರಂತರನ್ನೊಮ್ಮೆ ನೋಡುವ ಹಾಗೂ ಅವರ ಮಾತು ಕೇಳುವ ಸೌಭಾಗ್ಯ ನನಗೂ ಅಂದು ಸಿಕ್ಕಿತ್ತು. ಮಂಡ್ಯದಲ್ಲಿ “ವಿವೇಕಾನಂದ ಯುವ ವೇದಿಕೆ” ಯೊಂದರ ಉದ್ಘಾಟನಾ ನಿಮಿತ್ತ ಅವರು ಬಂದಿದ್ದರು. ಆ ಮಹಾನ್ ದೈತ್ಯ ಪ್ರತಿಭೆಯ ನಾಲ್ಕು ಮಾತುಗಳನ್ನು ಕೇಳಿ ಜೀವನ ಸಾರ್ಥಕ ಮಾಡಿಕೊಳ್ಳಲೋ ಎಂಬಂತೆ ಇಡೀ ನಗರದ ಜನ ಸಾಗರವೇ ಅಲ್ಲಿ ತುಂಬಿತ್ತು. ಕಾರ್ಯಕ್ರಮವೂ ಶುರುವಾಯಿತು. ನಾವೆಲ್ಲಾ ಕಾರಂತರನ್ನೇ ನೋಡುತ್ತಾ, ಮಾತು ಕೇಳುತ್ತಾ ಕುಳಿತಿದ್ದೆವು. ಅಲ್ಲಿಯ ಯವ ಮಂಡಳಿಯ ಮುಖ್ಯಸ್ಥನೊಬ್ಬ ಎದ್ದು...

ಭಕ್ತ ಕುಂಬಾರನನ್ನಾಗಿ ರಾಜಣ್ಣನನ್ನು ನೋಡುವುದತಿ ಚೆಂದ!

ಕನ್ನಡ ಚಿತ್ರಜಗತ್ತಿನ ಮರೆಯಲಾಗದ ಚಿತ್ರರತ್ನಗಳನ್ನು ಪಟ್ಟಿಮಾಡಬಹುದಾದರೆ, ಅದರಲ್ಲಿ ಅತಿ ಮುಖ್ಯವಾಗಿ “ಭಕ್ತ-ಕುಂಬಾರ”ವೂ ಒಂದು. “ಭಕ್ತ-ಕುಂಬಾರ” ಚಿತ್ರ ಹಲವಾರು ಕಾರಣಗಳಿಂದ ನನಗೆ ಇಷ್ಟವಾಗುತ್ತಾ ಹೋಗುತ್ತದೆ. ಪ್ರಮುಖವಾಗಿ ಚಿತ್ರದ ಕಥಾವಸ್ತು ಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಸರಳಾತೀಸರಳವಾಗಿರುವುದು. ನಿರೂಪಣೆಯ ಶೈಲಿ ಮಗುವಿಗೂ ಅರ್ಥವಾಗುವಷ್ಟು ಸುಲಲಿತವಾಗಿರುವುದು. ಜೊತೆಗೆ “ಹುಣಸೂರು ಕೃಷ್ಣಮೂರ್ತಿ” ಯವರಂಥ ಪ್ರತಿಭಾವಂತರು ಈ ಅತ್ಯದ್ಭುತ ಚಿತ್ರವನ್ನು ನಿರ್ದೇಶನ ಮಾಡಿರುವುದು, ಇಂದಿಗೂ, ಮುಂದೆಯೂ, ಕನ್ನಡ ಚಿತ್ರರಂಗದ ಕೊನೆಯುಸಿರಿರುವವರೆಗೂ ಮರೆಯಾಗದಂಥಹ ಸಾಹಿತ್ಯ, ಸಂಗೀತದ ಜುಗಲ್‍ಬಂದಿಯನ್ನು ಈ ಚಿತ್ರಕ್ಕೆ...

ಹಳ್ಳಿ ಲೆಕ್ಕ

ನಾನು ನನ್ನ ತಾತ ಹಾಗೂ ತಂದೆಯವರಿಂದ ಕಲಿತ ಕೆಲವು ಹಳೆಕಾಲದ ಗಣಿತಗಳನ್ನು ಇಂದಿಲ್ಲಿ ಸಂಗ್ರಹಿಸಿ ನಮ್ಮ ಮುಂದಿನ ಪೀಳಿಗೆಯ ಜನಾಂಗಕ್ಕಾಗಿ ದಾಖಲಿಸಬೇಕೆಂದುಕೊಂಡಿದ್ದೆ. ಆ ಪ್ರಯತ್ನದ ಫಲವಾಗಿ ಕೆಲವು ಹಳ್ಳಿ ಲೆಕ್ಕಗಳನ್ನು ನಾನಿಲ್ಲಿ ಹೇಳಹೊರಟಿದ್ದೇನೆ. ಹಿಂದಿನ ದಿನಗಳಲ್ಲಿ ಇತ್ತೀಚಿನ “ಪೈಸೆ” ಮತ್ತು “ರೂಪಾಯಿ”ಗಳಿರುವಂತೆ, “ಕಾಸು”ಗಳು ಚಲಾವಣೆಯಲ್ಲಿದ್ದವು. ಒಂದು ರೀತಿಯಲ್ಲಿ ನೋಡಿದರೆ, ಹಿಂದಿನ ಎಲ್ಲಾ ಲೆಕ್ಕಗಳಲ್ಲೂ ಈ “ಕಾಸು” ಮೂಲಾಧಾರವಾಗಿರುವುದು ಕಂಡು ಬರುತ್ತದೆ. “ಕಾಸು”ಗಳಿಂದ “ರೂಪಾಯಿ”, “ರೂಪಾಯಿ”ಗಳಿಂದಲೇ ತೂಕಕ್ಕೆ ಸಂಬಂಧಪಟ್ಟ ಅಳತೆಗಳು ಹುಟ್ಟಿರುವುದನ್ನು...

ಹಂಸಲೇಖಾರ ದೇಸಿಲೋಕದೊಳಗೊಂದು ಸುತ್ತು

ಕನ್ನಡ ಚಿತ್ರಜಗತ್ತಿನ ಪುಟಗಳಲ್ಲಿ ಬಹು ಮುಖ್ಯವಾಗಿ ಕಾಣಬಹುದಾದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಹಂಸಲೇಖಾರ ಹೆಸರೂ ಒಂದು. ಹಂಸಲೇಖಾರ ಹೆಸರು ಹಲವಾರು ಕಾರಣಗಳಿಂದಾಗಿ ಪ್ರಸಿದ್ಧಿ. ಬಾಲು, ಮಾಲು ಎಂದು ಹಾಡು ಬರೆದು ಹರೆಯದ ಹುಡುಗ-ಹುಡುಗಿಯರ ಯೌವ್ವನದ ಕಿಚ್ಚಿನ ಬುಡಕ್ಕೇ ಬೆಂಕಿ ಹಚ್ಚಿದ್ದಕ್ಕಾಗಿ, ಆ ವರ್ಗದ ಒಂದು ಗುಂಪಿಗೆ ಅವರು ಪ್ರೀತಿ. ನಂತರದ ದಿನಗಳಲ್ಲಿ ರವಿಚಂದ್ರನ್-ಹಂಸಲೇಖಾ ಅವರ ಜೊಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿನ ಅವರ ಸೊಗಸಾದ ಸಾಹಿತ್ಯ, ಸಂಗೀತ ಹಾಗೂ ಸಂಭಾಷಣೆಗಳಿಂದ...

“ಬಂಗಾರ”ದ ಮನುಷ್ಯರಿಲ್ಲದೆ ಬರಿದಾದ ಕನ್ನಡ ಚಿತ್ರರಂಗ

“ಬಂಗಾರದ ಮನುಷ್ಯ”ನ ಕಾಲಾನಂತರ ಕನ್ನಡ ಚಿತ್ರರಂಗವೇಕೆ ತುಕ್ಕು ಹಿಡಿದ ಕಬ್ಬಿಣವಾಗಗಿಹೋಯಿತು? ಕಲಾತ್ಮಕ ಚಿತ್ರಗಳು ಹಿಂದಿನಷ್ಟು ಸಂಖ್ಯೆಯಲ್ಲಿ ಬರದಿದ್ದರೂ, ಬಂದಷ್ಟೂ ಒಂದಷ್ಟು ಹೆಸರುಮಾಡಿ ನಮ್ಮ ಮರ್ಯಾದೆ ಸಂಪೂರ್ಣವಾಗಿ ಹೋಗದಂತೆ ನೋಡಿಕೊಳ್ಳುತ್ತಿವ್ಯಾದರೂ ಬೇರೆ ಭಾಷೆಗಳ ಪ್ರಗತಿಯನ್ನು ಗಮನಿಸಿದಾಗ ನಮ್ಮ ಸಾಧವೆ ಏನೇನೂ ಸಾಲದೇನೋ ಅನ್ನಿಸುತ್ತದೆ. ಈ ಗುಂಪಿನ ಚಿತ್ರಗಳನ್ನು ಹೊರತುಪಡಿಸಿ ಕನ್ನಡ ಚಿತ್ರರಂಗದತ್ತ ಒಮ್ಮೆ ನೋಡಿದರೆ “ಥತ್! ಎಲ್ಲಿ ಹೋದವಾ ದಿನಗಳು?” ಎಂದೆನಿಸಿ ಬೇಸರವಾಗುತ್ತದೆ. ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರಗಳಂತೂ ಇಲ್ಲ. ಮನರಂಜನೆಯಂತೂ...